ದಿನಾಂಕ 11-03-2026 ರಂದು ರಾಯಬಾಗ ವಕೀಲರ ಸಂಘದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ೨೩ ಸದಸ್ಯರುಗಳ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಬಸೆಟ್ಟೆಪ್ಪಾ ಚುನಾವಣಾಧಿಕಾರಿಗಳಾಗಿ ಕಾಯ೯ನಿವ೯ಹಿಸಿದರು, ಪೋಲಿಂಗ್ ಏಜೆಂಟರಾಗಿ ಹಿರಿಯ ವಕೀಲರಾದ ಶ್ರೀ ಎ.ಬಿ.ಮಂಗಸೂಳೆ ವಕೀಲರು ಮತ್ತು ಎಸ್.ಎಸ್.ನಾಯಿಕ ವಕೀಲರು ಕಾರ್ಯ ನಿರ್ವಹಿಸಿದರು.ರಾಯಬಾಗ ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ ಮತ್ತು ಇತರ ಪದಾಧಿಕಾರಿಗಳು ಸಂಘದ ಎಲ್ಲ ವಕೀಲರಿಗೆ ಶಾಂತಿಯುತವಾಗಿ ಮತದಾನ ಮಾಡಲು ಸಹಕರಿಸಿದಕ್ಕೆ, ಮತ್ತು ರಾಯಬಾಗ ಪೋಲಿಸ್ ಸಿಬ್ಬಂದಿ ಗಳಿಗೆ, ಮತದಾನ ಪ್ರಕ್ರಿಯೆ ಮಾಡಲು ಸಹಕರಿಸಿದ ಪೂಜೇರಿ ಮತ್ತು ಇತರ ಸಿಬ್ಬಂದಿಗಳಿಗೆ ಧನ್ಯವಾದಗಳು ಸಲ್ಲಿಸಿದರು.ಆರಾಮ ವಿಲ್ಲದರು ಕೂಡ ಮತದಾನ ಮಾಡಲು ಬಂದತ ಶ್ರೀದೇವಿ ನಾಯಿಕ ವಕೀಲರು ಬಂದು ಮತ ಚಲಾಯಿಸಿದು ವಿಶೇಷವಾಗಿತು.ಮುಂದಿನ ತಿಂಗಳಿನಲ್ಲಿ ಮತದಾನ ಎಣಿಕೆ ಕಾರ್ಯ ಪ್ರಾರಂಭವಾಗುವುದು 335 ಮತಗಳ ಪೈಕಿ 307 ಮತಗಳ ಚಲಾವಣೆ ಆಗಿದ್ದವು