ಬೆಳಗಾವಿ
• ಬೆಳಗಾವಿ: ಬೆಚ್ಚಿಬೀಳಿಸುವ ಘಟನೆ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪತ್ನಿಯೇ ತನ್ನ ಬಾಯ್ಫ್ರೆಂಡ್ ಜೊತೆಗೂಡಿ ಪತಿಯ ಹತ್ಯೆ ಮಾಡಿಸಿದ ಪ್ರಕರಣ ಬಯಲಾಗಿದೆ.
• ಖಾಸಗಿ ಆಯುರ್ವೇದಿಕ್ ಕಾಲೇಜಿನಲ್ಲಿ ಥೆರಪಿಸ್ಟ್ ಆಗಿದ್ದ ಅವಿನಾಶ ಸೂಪ್ಪಣ್ಣವರ (40) ಅವರನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ.
ಆರೋಪಿಗಳು ಮೊದಲಿಗೆ ಮೂರು ಸ್ಟ್ರಿಪ್ ನಿದ್ರೆ ಮಾತ್ರೆಯನ್ನು ತಂಪು ಪಾನೀಯದಲ್ಲಿ ಮಿಶ್ರಣ ಮಾಡಿ ಕೊಟ್ಟಿದ್ದಾರೆ. ಅವಿನಾಶ ಕುಸಿದು ಬಿದ್ದ ಬಳಿಕ, ತುಂಬಿದ ಗ್ಯಾಸ್ ಸಿಲಿಂಡರ್ ಅನ್ನು ತಲೆಯ ಮೇಲೆ ಎತ್ತಿ ಹಾಕಿ ಕೊಲೆ ನಡೆಸಿದ್ದಾರೆ ಎಂಬ ಭಯಾನಕ ಮಾಹಿತಿ ಹೊರಬಂದಿದೆ.
• ಈ ಪ್ರಕರಣದಲ್ಲಿ ಮೃತನ ಪತ್ನಿ ಲಕ್ಷ್ಮಿ ಸೂಪ್ಪಣ್ಣವರ ಹಾಗೂ ಆಕೆಯ ಬಾಯ್ಫ್ರೆಂಡ್ ಕೈಲಾಶ್ ಅಚ್ಚಿತಾಲ್ ಅವರನ್ನು ಟಿಳಕವಾಡಿ ಪೊಲೀಸರು ಬಂಧಿಸಿ ಜೈಲಿಗೆ ರವಾನೆ ಮಾಡಿದ್ದಾರೆ.
• ಪೊಲೀಸ್ ತನಿಖೆಯಲ್ಲಿ ಪತ್ನಿಯ ಅಕ್ರಮ ಸಂಬಂಧವೇ ಈ ಹತ್ಯೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಕೈಲಾಶ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಲಕ್ಷ್ಮಿ, ಈ ಕೊಲೆಯನ್ನು ಸಹಜ ಸಾವು ಎಂದು ತೋರಿಸಲು ಯತ್ನಿಸಿದ್ದಳು ಎನ್ನಲಾಗಿದೆ.
• ಮೃತನ ತಾಯಿ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಪ್ರಕರಣದ ಸತ್ಯ ಹೊರಬಂದಿದೆ. ತನಿಖೆಯಲ್ಲಿ ಪತ್ನಿ ಹಾಗೂ ಆಕೆಯ ಬಾಯ್ಫ್ರೆಂಡ್ನ ಕರಾಳ ಮುಖ ಬಯಲಾಗಿದೆ.
