March 29, 2026
WhatsApp Image 2026-03-20 at 2.47.35 PM

ರಾಯಬಾಗ ತಾಲೂಕಿನ ಮೊರಬ ಘಟನೆ

ಮುಖ್ಯ ಶಿಕ್ಷಕನ ಕರ್ತವ್ಯಲೋಪದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿ: ಮೊರಬದಲ್ಲಿ ಘಟನೆ ಬೆಳಕಿಗೆ
ರಾಯಬಾಗ: ಶಾಲಾ ಆಡಳಿತದ ನಿರ್ಲಕ್ಷ್ಯದಿಂದ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿರುವ ಘಟನೆ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಜಿತ ಬಾನೆ ಅನುದಾನರಹಿತ ಪ್ರೌಢ ಶಾಲೆಯ ಅಜೀತ ಸರವ ವಿದ್ಯಾರ್ಥಿ ಕಳೆದ ಸಾಲಿನಲ್ಲಿ ಅನುತ್ತೀರ್ಣನಾಗಿದ್ದ ಹಿನ್ನೆಲೆಯಲ್ಲಿ ಈ ವರ್ಷ ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾಗಲು ಶುಲ್ಕವನ್ನು ಪಾವತಿಸಿದ್ದನು. ಆದರೆ ಮುಖ್ಯೋಪಾಧ್ಯಾಯ ಪ್ರತಾಪ ಬಗ್ಗೆ ಅವರ ಅಜಾಗರೂಕತೆಯಿಂದ ವಿದ್ಯಾರ್ಥಿಯ ಹೆಸರು ಪರೀಕ್ಷಾ ಪಟ್ಟಿಯಲ್ಲಿ ಸೇರದೆ , ಪ್ರವೇಶ ಪತ್ರ ಸಿಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾನೆ ಎನ್ನಲಾಗಿದೆ.
ಈ ಘಟನೆ ವಿದ್ಯಾರ್ಥಿ ಹಾಗೂ ಕುಟುಂಬದವರಲ್ಲಿ ಆತಂಕ ಮತ್ತು ಬೇಸರಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಯ ನೋವು: “ಈ ವರ್ಷ ಪರೀಕ್ಷೆಗೆ ತುಂಬಾ ಸಿದ್ಧತೆ ಮಾಡಿಕೊಂಡಿದ್ದೆ. ಶುಲ್ಕವೂ ಪಾವತಿಸಿದ್ದೇನೆ. ಆದರೆ ಶಾಲೆಯ ತಪ್ಪಿನಿಂದ ಪರೀಕ್ಷೆಗೆ ಅವಕಾಶ ಸಿಗಲಿಲ್ಲ. ನನ್ನ ಭವಿಷ್ಯಕ್ಕೆ ಇದರಿಂದ ಹಾನಿಯಾಗಿದೆ. ಸಂಬಂಧಪಟ್ಟವರು ನನ್ನ ಸಮಸ್ಯೆಗೆ ಪರಿಹಾರ ಕೊಡಬೇಕು” ಎಂದು ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದಾನೆ.
ಈ ಕುರಿತು ಪೋಷಕರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555