May 30, 2026
WhatsApp Image 2026-04-09 at 10.33.18 AM (1)

ಖಾನಾಪೂರ ತಾಲೂಕಿನ ನಂದಗಡ 

•  ನಂದಗಡ ಆಸ್ಪತ್ರೆಯಲ್ಲಿ ವೈದ್ಯರ ದರ್ಶನ ದುರ್ಲಭ
•   ಗಂಟೆಗಟ್ಟಲೆ ಕಾದರೂ ಬಾರದ ವೈದ್ಯಕೀಯ ಸಿಬ್ಬಂದಿ
•   ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಸಿಗದ ಚಿಕಿತ್ಸೆ
•   ಜಿಲ್ಲಾ ಆರೋಗ್ಯಾಧಿಕಾರಿಗಳೇ ಆಸ್ಪತ್ರೆ ಕಡೆ ಗಮನಹರಿಸಿ

♦  ಖಾನಾಪೂರ ತಾಲೂಕಿನ ನಂದಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಚಿಕಿತ್ಸೆಗಾಗಿ ಬರುವ ರೋಗಿಗಳು ಗಂಟೆಗಟ್ಟಲೆ ಕಾಯುವಂತಾಗಿದ್ದು, ಕೇಳುವವರು ಯಾರೂ ಇಲ್ಲದಂತಾಗಿದೆ.

♦  ಖಾನಾಪೂರ ತಾಲೂಕಿನ ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಇಲ್ಲಿನ ಪೀಡಿಯಾಟ್ರಿಷಿಯನ್ (ಮಕ್ಕಳ ವೈದ್ಯರು) ಲಭ್ಯವಿಲ್ಲದ ಕಾರಣ, ಜ್ವರ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವ ನೂರಾರು ಮಕ್ಕಳು ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ತಮಗೆ ಹಾಗೂ ಮಗುವಿಗೆ ಚಿಕಿತ್ಸೆ ಕೊಡಿಸಲು ಬಂದಿದ್ದ ಗ್ರಾಮ ಸಹಾಯಕ ಇಬ್ರಾಹಿಂ ತಹಶೀಲ್ದಾರ್ ಅವರು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಗಂಟೆಗಟ್ಟಲೆ ಕಾದು ಸುಸ್ತಾಗಿದ್ದಾರೆ. “ಕೇಳುವವರು ಯಾರೂ ಇಲ್ಲ, ಹೇಳುವವರು ಯಾರೂ ಇಲ್ಲ” ಎನ್ನುವಂತಾಗಿರುವ ಈ ಪರಿಸ್ಥಿತಿಯು ಬಡ ರೋಗಿಗಳ ಪಾಲಿಗೆ ಶಾಪವಾಗಿ. ಪರಿಣಮಿಸಿದೆ.

♦  ಆಸ್ಪತ್ರೆಗೆ ಬರುವ ರೋಗಿಗಳ ಗೋಳು ಕೇಳುವವರಿಲ್ಲದ ಕಾರಣ, ಇಲ್ಲಿನ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳು (DHO) ತಕ್ಷಣವೇ ಮಧ್ಯಪ್ರವೇಶಿಸಿ, ಇಲ್ಲಿನ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸುವ ಮೂಲಕ ಬಡವರ ಆರೋಗ್ಯದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕೆಂದು ಇಬ್ರಾಹಿಂ ತಹಶೀಲ್ದಾರ್ ಹಾಗೂ ಸ್ಥಳೀಯ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555