#ಬೆಳಗಾವಿ
ಬೆಳಗಾವಿ: ಭೂದಾಖಲೆಗಳ ಇಲಾಖೆಯಲ್ಲಿ ಕಳೆದೆರಡು ದಶಕದಿಂದ ಕಾರ್ಯ ನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರ ಸೇವೆಯನ್ನು ‘ಒಂದು ಬಾರಿ ವಿಶೇಷ ನೇಮಕಾತಿ‘ ಅಡಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದವರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
